ರೇಣುಕಾಸ್ವಾಮಿ (1991 - ಜೂನ್ 8, 2024) ಚಿತ್ರದುರ್ಗದ ನಿವಾಸಿ. ಕನ್ನಡದ ಚಲನಚಿತ್ರ ನಟ ದರ್ಶನ್ ತೂಗುದೀಪ್ ರವರ ದೀರ್ಘಕಾಲದ ಸಂಗಾತಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆಂದು ಆರೋಪಿಸಿ ದರ್ಶನ್ ಸ್ನೇಹಿತರು ಮತ್ತು ಅವರೊಂದಿಗೆ ಕೆಲಸ ಮಾಡುತಿದ್ದ ವ್ಯಕ್ತಿಗಳು ರೇಣುಕಾಸ್ವಾಮಿಯನ್ನು ಅಪಹರಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ. ಈ ಘಟನೆಯು ಸಾಮಾಜಿಕ ಜಾಲತಾಣದ ದುಷ್ಫರಿಣಾಮ ಮತ್ತು ಅದರ ಅಡ್ಡಪರಿಣಾಮಗಳಿಂದಾಗಿದೆ. ಇದು ಕರ್ನಾಟಕದ ಚಲನಚಿತ್ರೋದ್ಯಮ ಮತ್ತು ರಾಷ್ಟ್ರದಾದ್ಯಂತ ಆಘಾತವನ್ನುಂಟು ಮಾಡಿದೆ. == ಸಂತ್ರಸ್ತ == ರೇಣುಕಾಸ್ವಾಮಿ (ರೇಣುಕಾಸ್ವಾಮಿ) ಕಾಶಿನಾಥ ಶಿವನಗೌಡರ ಮತ್ತು ಅವರ ಪತ್ನಿ ರತ್ನಪ್ರಭಾ ಅವರ ಏಕೈಕ ಪುತ್ರ. ಅವರು ಕುಟುಂಬದ ಏಕೈಕ ಜೀವನಾಧಾರರಾಗಿದ್ದರು. 2023 ರಲ್ಲಿ ವಿವಾಹವಾಗಿದ್ದು ಆತನ ಕೊಲೆಯ ಸಮಯದಲ್ಲಿ, ಅವರ ಪತ್ನಿ ಮೊದಲ ಮಗುವಿಗೆ ಗರ್ಭಿಣಿಯಾಗಿದ್ದಾರೆ. ರೇಣುಕಾಸ್ವಾಮಿ ಅವರು ಚಿತ್ರದುರ್ಗದ ಔಷಧಾಲಯದಲ್ಲಿ ಕೆಲಸ ಮಾಡುತ್ತಿದ್ದುರು, ಇಲ್ಲಿಂದ ಅವರನ್ನು ಅಪಹರಿಸಿ ಕೊಲೆ ಬೆಂಗಳೂರಿನಲ್ಲಿ ಮಾಡಲಾಗಿದೆ. ದರ್ಶನ್ ಅವರ ಸ್ನೇಹಿತೆಯಾಗಿರುವ ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದರು ಎನ್ನಲಾಗಿದೆ. ಅವರ ಸಾವಿಗೆ ಕಾರಣ ಮಾರಣಾಂತಿಕ ಹಲ್ಲೆಯಿಂದಾದ ರಕ್ತಸ್ರಾವ ಎಂದು ಪ್ರಾಥಮಿಕ ವರದಿಯಲ್ಲಿ ಹೇಳಲಾಗಿದೆ. == ಕೊಲೆ == 2024ರಲ್ಲಿ ರೇಣುಕಾಸ್ವಾಮಿ ಪವಿತ್ರ ಗೌಡಳಿಗೆ ಸೋಶಿಯಲ್ ಮೀಡಿಯಾದಿಂದ (ಇನ್ಸ್ಟಾಗ್ರಾಮ್)ಅಶ್ಲೀಲ್ಲ ಸಂದೇಶ, ಚಿತ್ರ ಹಾಗೂ ವಿಡಿಯೋ ಗಳನ್ನೂ ಕಳುಹಿಸಿದ್ಧನೊಂದು ಆರೋಪಿಸಲಾಗಿದೆ. ವಿಜಯಲಕ್ಷ್ಮಿ ಯವರನ್ನು ಮದುವೆಯಾಗಿದ್ದರೂ ದರ್ಶನ್ ರವರಿಗೆ ಪವಿತ್ರಳ ಜೊತೆ ಸಂಭಂದವಿತ್ತು ಎಂದು ಹೇಳಲಾಗುತ್ತಿದೆ ಜೂನ್ 7, 2024 ರಂದು, ರೇಣುಕಾಸ್ವಾಮಿಯನ್ನು ದರ್ಶನ್ ಸಹಚರರಾದ ರಘು ಅಪಹರಿಸಿ ಶೆಡ್‌ನಲ್ಲಿಟ್ಟಿದ್ದರು ಅಲ್ಲಿ ಅವರನ್ನು ಹೊಡೆದು ಕೊಂದ್ದಾರೆಂದು ವರದಿಯಾಗಿದೆ. ಕೆಲವು ವರದಿಗಳ ಪ್ರಕಾರ, ದರ್ಶನ್ ಬೆಲ್ಟ್‌ನಿಂದ ಹೊಡೆದು ಕರೆಂಟ್ ಶಾಕ್ ನೀಡಿದ್ದಾರೆ ಎನ್ನಲಾಗಿದೆ. ರೇಣುಕಸ್ವಮಿಯ ಕುಟುಂಬದವರು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ಪೊಲಿಸ್ ಠಾಣೆಗೆ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದರು. ಜೂನ್ 9, 2024 ರಂದು, ದರ್ಶನ್ ಅಭಿನಯಿಸುತ್ತಿರುವ ಚಿತ್ರದ "ಡೆವಿಲ್: ದಿ ಹೀರೋ", ಚಿತ್ರೀಕರಣದಲ್ಲಿದ್ದರು. ಅಲ್ಲಿಂದ ಅವರನ್ನು ವಿಚಾರಣೆಗಾಗಿ ಪವಿತ್ರ ಗೌಡಳರೋಂದಿಗೆ ಠಾಣೆಗೆ ಕರೆದೊಯ್ಯಲಾಯಿತು. ರೇಣುಕ ಸ್ವಾಮಿಗೆ ದೊಣ್ಣೆಯಿಂದ ಹೊಡೆದು ಹಲವು ಬಾರಿ ವಿದ್ಯುತ್ ಶಾಕ್ ನೀಡಿದಾಗ ಪವಿತ್ರ ಗೌಡ ಶೆಡ್‌ನಲ್ಲಿ ಸ್ವಲ್ಪ ಸಮಯ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ರೇಣುಕಸ್ವಮಿ ಮಾಡಿದ ಪೋಸ್ಟ್‌ಗಳಿಗಾಗಿ ಶಿಕ್ಷಿಸಲು ಪವಿತ್ರ ರವರು ದರ್ಶನ್ ಅವರನ್ನು ಪ್ರಚೋದಿಸಿದರು ಎನ್ನಲಾಗಿದೆ. "ಭೀಕರ ಹಲ್ಲೆಯ ಪರಿಣಾಮ, ರೇಣುಕಾಸ್ವಾಮಿಯ ಸಾವು ಸಂಭವಿಸಿದೆ” ಎಂಬ ಅಂಶ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಬಯಲಾಗಿದೆ. ಅವರ ವೃಷಣಗಳು ಛಿದ್ರವಾಗಿದ್ದು ಅವರ ಒಂದು ಕಿವಿ ಕಾಣೆಯಾಗಿದೆ ಎಂದು ವರದಿಗಳು ಹೇಳಿವೆ. ಆರೋಪಿಗಳಲ್ಲಿ ಒಬ್ಬನಾದ ದೀಪಕ್ ಕುಮಾರ್ (ಪ್ರಸ್ತುತ ಆರೋಪಿ ನಂ. 13) ಪ್ರಕರಣದಲ್ಲಿ ಕೃತ್ಯದ ಸಾಕ್ಷಿದಾರನಾಗಲಿ ಸ್ವಯಂಪ್ರೇರಿತರಾಗಿ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ರೇಣುಕಾಸ್ವಾಮಿ ಹತ್ಯೆಯಾದಾಗ ಅಪರಾಧ ನಡೆದ ಸ್ಥಳದ ಶೆಡ್‌ನಲ್ಲಿ ದೀಪಕ್ ಇದ್ದನು ಮತ್ತು ನಂತರ ಪೊಲೀಸರಿಗೆ ಶರಣಾದ ನಾಲ್ವರಿಗೆ ತಲಾ ₹ 5 ಲಕ್ಷ ವಿತರಿಸಿದನು, ದರ್ಶನ್ ಅವರನ್ನು ರಕ್ಷಿಸುವ ಉದ್ದೇಶದಿಂದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ದರ್ಶನ್ ಇತರ ಆರೋಪಿಗಳ ಜತೆ ಸೇರಿ ಸಂತ್ರಸ್ತೆಗೆ ಚಿತ್ರಹಿಂಸೆ ನೀಡಿದ್ದುಗಿಯೂ, ದರ್ಶನ್ ರೇಣುಕಾಸ್ವಾಮಿಯ ಅವರ ಖಾಸಗಿ ಅಂಗಗಳಿಗೆ ಒದೆಯುವುದರಿಂದಲೇ ಸಾವಿಗೆ ಕಾರಣವಾಗಿದೆ ಎಂದು ದೀಪಕ್ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಜೂನ್ 8, 2024 ರಂದು ಪೊಲೀಸರು ರೇಣುಕಾಸ್ವಾಮಿ ಅವರ ಶವವನ್ನು ಸುಮ್ಮನಹಳ್ಳಿ ಸೇತುವೆಯಲ್ಲಿ ಪತ್ತೆ ಮಾಡಿದರು. ರೇಣುಕಸ್ವಾಮಿಯ ಹೆಂಡತಿ ಸೇರಿದಂತೆ ಅವರ ಕುಟುಂಬವು ಅವರ ಸಾವಿಗಾಗಿ ನ್ಯಾಯಕ್ಕಾಗಿ ಒತ್ತಾಯಿಸಿದರು. ಪೊಲೀಸ್ ಅಧಿಕಾರಿಗಳಾದ ಗಿರೀಶ್ ನಾಯ್ಕ್ ಮತ್ತು ಬಿ.ದಯಾನಂದ ಅವರನ್ನು ಪ್ರಕರಣಕ್ಕೆ ನಿಯೋಜಿಸಲಾಗಿತ್ತು. == ತನಿಖೆ == ಈ ಪ್ರಕರಣವನ್ನು ವರದಿ ಮಾಡುವಾಗ, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಪತ್ರಕರ್ತ ರಕ್ಷಿತ್ ಗೌಡ ಮೇಲೆ ನಾಲ್ವರು ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ. ಜೂನ್ 18 ರಂದು, ಸೈಬರ್ ಸೆಲ್ ರೇಣುಕಾಸ್ವಾಮಿ ಅಕೌಂಟ್ ಹ್ಯಾಕಿಂಗ್‌ಗೆ ಮಾಡಿ ಪವಿತ್ರಾಳಿಗೆ ಅಶ್ಲೀಲ ಸಂದೇಶವನ್ನು ಬೇರೊಬ್ಬ ಮಾಡಿದ್ದಾನೆಯೆ ಎಂದು ತನಿಖೆ ನಡೆಸಿತು. ದರ್ಶನ್ ಅವರ ತೋಟದ ಮನೆಯ ಮ್ಯಾನೇಜರ್ ಏಪ್ರಿಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬಹಿರಂಗವಾಯಿತು ಜೂನ್ 20 ರಂದು ದರ್ಶನ್ ಆರೋಪ ಎದುರಿಸಲು ನ್ಯಾಯಾಲಯಕ್ಕೆ ಬಂದಿದ್ದರು. ತನಿಖೆ ಮುಂದುವರಿದಿದೆ, ದರ್ಶನ್ ಈಗ ಖೈದಿ ಸಂಖ್ಯೆ 6106 ಆಗಿ ಜೈಲಿನಲ್ಲಿ ಇದ್ದಾರೆ, ಇದು ಒಬ್ಬ ಸ್ಟಾರ್ ನಟನ ನಾಟಕೀಯ ಪತನ. ಅವರ ನಂತರ ಧನರಾಜ್ (6107), ವಿನಯ್ (6108), ಮತ್ತು ಪ್ರದೋಶ್ (6109). ಆರಂಭದಲ್ಲಿ ಹೆಚ್ಚಿನ ಭದ್ರತೆಯ ಸೆಲ್‌ನಲ್ಲಿ ಇರಿಸಲಾಗಿತ್ತು, ನಂತರ ಅವರನ್ನು ಜೈಲು ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತದೆ ಮತ್ತು ನಂತರ ಬ್ಯಾರಕ್‌ಗಳಿಗೆ ಸ್ಥಳಾಂತರಿಸಲಾಗುತ್ತದೆ. == ಪ್ರತಿಕ್ರಿಯೆಗಳು == ಕಳೆದ ವಾರ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಅವರನ್ನು ಬಂಧಿಸಲಾಗಿತ್ತು. ಬಂಧನವಾದಾಗಿನಿಂದಲೂ, ಸಾಮಾಜಿಕ ಮಾಧ್ಯಮದಲ್ಲಿ ಸೆಲೆಬ್ರಿಟಿಗಳು, ಕಾರ್ಯಕರ್ತರು ಮತ್ತು ಇತರ ನಟರ ಅಭಿಮಾನಿಗಳು ಕಾಮೆಂಟ್‌ಗಳು, ಪ್ರತಿಕ್ರಿಯೆಗಳು ಮತ್ತು ಅಭಿಪ್ರಾಯಗಳಿಂದ ತುಂಬಿದೆ. ದರ್ಶನ್​ ಜತೆ ಇರೋರೆಲ್ಲ ರೌಡಿಗಳು, ಬೇರೆ ನಟರಷ್ಟು ಅಭಿಮಾನಿಗಳು ಆತನಿಗಿಲ್ಲ! ನಟಿ ರಮ್ಯಾ ಸ್ಫೋಟಕ ಹೇಳಿಕೆ ನೀಡಿದ್ದಾರೆ ನಟಿ ಶ್ರುತಿ, ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಜೀವ ಕಳೆದುಕೊಂಡವರಿಗೆ ಹಾಗೂ ಇನ್ನು ಜಗತ್ತನ್ನೇ ನೋಡದ ಮಗುವಿಗೆ ನ್ಯಾಯ ಸಿಗಬೇಕು ಎಂದಿದ್ದಾರೆ ನಿಷೇಧಕ್ಕಿಂತ ಸಂತ್ರಸ್ತರಿಗೆ ನ್ಯಾಯ ಸಿಗುವಂತೆ ನೋಡಿಕೊಳ್ಳುವುದು ಮುಖ್ಯ ಎಂದ ಕಿಚ್ಚ ಸುದೀಪ್ . ಚಲನಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಅವರು ಪ್ರತಿಕ್ರಿಯೆ ದರ್ಶನ್ ಅವರನ್ನು ನಿಷೇಧಿಸುವಂತೆ ಕನ್ನಡ ಫಿಲಂ ಚೇಂಬರ್‌ಗೆ ಒತ್ತಾಯಿಸಿ ಚಿತ್ರದುರ್ಗದಲ್ಲಿ ಪ್ರತಿಭಟನೆಗಳುನಡೆದವು. == ನಂತರದ ಪರಿಣಾಮ == ವಿಧವೆಗೆ ಕೆಲಸ ಕೊಡಿಸುವಂತೆ ರೇಣುಕಾಸ್ವಾಮಿ ಅವರ ಪೋಷಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. == ಉಲ್ಲೇಖಗಳು ==